ಕವಿ ಪರಿಚಯ 👇👇👇👇👇👇👇👇👇👇👇👇👇👇👇👇👇👇👇👇👇
ಎ.ಎನ್. ಮೂರ್ತಿರಾವ್ ಇವರು ಕ್ರಿ.ಶ.೧೯೦೦ ರಲ್ಲಿ ಮಂಡ್ಯಜಿಲ್ಲೆಯ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದ್ದಾರೆ.
ಇವರ ಪೂರ್ಣಹೆಸರು ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿರಾವ್. ಆಧುನಿಕ ಕನ್ನಡದ ಪ್ರಮುಖ
ಗದ್ಯಬರೆಹಗಾರರಾದ ಇವರು ಪ್ರಬಂಧಕಾರರಾಗಿಯೇ ಮಾನ್ಯರಾಗಿದ್ದಾರೆ. ಹಗಲುಗನಸುಗಳು.ಅಲೆಯುವ
ಮನ, ಅಪರವಯಸ್ಕನ ಅಮೆರಿಕಾಯಾತ್ರೆ, ಮಿನುಗು-ಮಿಂಚ
ಮಿಂಚು , ಪೂರ್ವಸೂರಿಗಳೊಡನೆಚಂಡಮಾರುತ ಮೊದಲಾದ ಪ್ರಮುಖ ಕೃತಿಗಳನ್ನು ಬರೆದಿದ್ದಾರೆ.
ಇವರ ಚಿತ್ರಗಳು- ಪತ್ರಗಳು ಎಂಬ ಕೃತಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ, ದೇವರು ಎಂಬ ಕೃತಿಗೆಪಂಪ
ಪ್ರಶಸ್ತಿ ಲಭಿಸಿದೆ. ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಿ.ಲಿಟ್. ಪದವಿ ನೀಡಿದೆ. ೧೯೮೪ರಲ್ಲಿಕೈವಾರದಲ್ಲಿ
ನಡೆದ ೫೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ಅಭ್ಯಾಸ ಪ್ರಶ್ನೋತ್ತರಗಳು
ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದೊಂದು ವಾಕ್ಯಗಳಲ್ಲಿ ಉತ್ತರಿಸಿ.👇👇👇👇👇👇👇👇👇👇👇👇👇👇👇👇👇👇👇
1. ¨ಭಗವದ್ಗೀತೆಯನ್ನು ರಚಿಸಿದವರು ಯಾರು ?
ಭಗವದ್ಗೀತೆಯನ್ನು ರಚಿಸಿದವರುಮಹರ್ಷಿ ವೇದವ್ಯಾಸರು.
2. ಹುಲಿಗೆ ಪರಮಾನಂದವಾಗಲು ಕಾರಣವೇನು ?
ಶಾನುಭೋಗರ ದುಂಡುದುಂಡಾದ ಶರೀರವನ್ನು ನೋಡಿ ಹುಲಿಗೆ ಪರಮಾನಂದವಾಯಿತು.
3. ಶಾನುಭೋಗರಿಗೆ ತಲೆ ಸುತ್ತಲು ಕಾರಣವೇನು ?
ಹುಲಿಗೆ ತಮ್ಮ ಮುಖದರ್ಶನವಾಗದಂತೆ ತಪ್ಪಸಿಕೊಳ್ಳುವ ದೊಂಬರಾಟದಲ್ಲಿ ಶಾನುಭೋಗರ ತಲೆ
ಸುತ್ತಲಾರಂಭಿಸಿತು.
4. ಶಾನುಭೋಗರ ‘ಬ್ರಹ್ಮಸ್ಟ್ರಾ ’ ಯಾವುದು ?
ಶಾನುಭೋಗರ ಬ್ರಹ್ಮಾಸ್ಟ್ರ ಖಿರ್ದಿ ಪುಸ್ತಕ
5. ಹಸಿದು ಮಲಗಿದ್ದ ಹುಲಿಯುವಿಧಿ ಏನೆಂದು ಯೋಚಿಸಿತು ?
ಹಸಿದು ಮಲಗಿದ್ದ ಹುಲಿಯುವಿಧಿ ಆಹಾರಕ್ಕೆ ಏನನ್ನು ಒದಗಿಸುವುದೋ ಎಂದು ಯೋಚಿಸಿತು.
ಹೆಚ್ಚುವರಿ ಪ್ರಶ್ನೋತ್ತರಗಳು
6.ಶಾನುಭೋಗರ ರಾಜಭಕ್ತಿಯ ಲಾಂಛನ ಯಾವುದಾಗಿತ್ತು ?
ಖಿರ್ದಿ ಪುಸ್ತಕ ಶಾನುಭೋಗರ ರಾಜಭಕ್ತಿಯ ಲಾಂಛನವಾಗಿತ್ತು.
7.ಶಾನುಭೋಗರನ್ನು ಮೂರ್ಛೆಯಿಂದ ಎಚರಿ್ಚರಿಸಿದದವರು
ಯಾರು ?
ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ಶಾನುಭೋಗರನ್ನು ಮೂರ್ಛೆಯಿಂದ ಎಚ್ಚರಿಸಿದವರು.
8. ಎ.ಎನ್. ಮೂರ್ತಿರಾಯರ ಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು ಯಾರಿಂದ ?
ಎ.ಎನ್. ಮೂರ್ತಿರಾಯರಪ್ರಕಾರ ಶಾನುಭೋಗರು ಜೀವಸಹಿತ ಉಳಿದಿದ್ದು ಹುಲಿಯ ಧರ್ಮಶ್ರದ್ಧೆಯಿಂದ ಎಂದು ಹೇಳಬಹುದು.
9.ಹುಲಿಯ ಆನಂದಕ್ಕೆ ಕೊರೆತ ಕಂಡದ್ದು ಏಕೆ ?
ಶಾನುಭೋಗರು ಹುಲಿಗೆ ಅಭಿಮುಖರಾಗಿರದೆ ಅದರ ಕಡೆಗೆ ಬೆನ್ನುತಿರುಗಿಸಿ ನಡೆಯುತ್ತಿದ್ದರಿಂದ ಹುಲಿಯ ಆನಂದಕ್ಕೆ ಕೊರೆತ ಕಂಡು ಬಂತು.
ಆ) ಕೊಟ್ಟಿರುವ ಪ್ರಶ್ನೆಗಳಿಗೆ ಮೂರು-ನಾಲ್ಕು ವಾಕ್ಯಗಳಲ್ಲಿ ಉತ್ತರಿಸಿ.👇👇👇👇👇👇👇👇👇👇👇👇👇👇👇
1. ಮದಲಿಂಗನ ಕಣಿವೆಯಲ್ಲಿ ಬರುವಾಗ ಶಾನುಭೋಗರು ಏನೆಂದು ಯೋಚಿಸಿದರು ?
ಶಾನುಭೋಗರು ತಮ್ಮ ಹಳ್ಳಿಯನ್ನು ತಲಪಬೇಕಾದರೆ ಮದಲಿಂಗನ ಕಣಿವೆಯನ್ನು ದಾಟಿ ಹೋಗಬೇಕಿತ್ತು . ಅದು ಕಾಡುದಾರಿ, ಆದರೂ
ಬೆಳುದಿಂಗಳ ದಿನ ; ಆ ಮದಲಿಂಗನ ಕಣಿವೆಯಲ್ಲಿ ಬರುವಾಗ ಸ್ವಲ್ಪ ದೊಡ್ಡ ಹೆಜ್ಜೆ ಹಾಕಿದರೆ ಊಟದ ಹೊತ್ತಿಗೆ ಊರು ಸೇರಿಕೊಳ್ಳಬಹುದು
ಎಂದು ಯೋಚಿಸಿರು .
2. ಹುಲಿಯು ಹಿಂದಿನಿಂದ ಹಾರಿ ಕೊಲ್ಲದಿರಲು ಕಾರಣಗಳೇನು ?
¨ಭರತಖಂಡ ಹುಲಿಗಳ ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವ ನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ,ಮಹರ್ಷಿ ವೇದವ್ಯಾಸರಿಂದ ರಚಿತವಾದ ¨ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ¨ಭರತ ¨ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ಭರತಖಂಡದ ಹುಲಿಗಲು ಹಿಂದಿನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ
3. ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದ ಘಟನೆಗಳನ್ನು ವಿವರಿಸಿ.
ಶಾನುಭೋಗರು ಮೂರ್ಛೆಯಲ್ಲಿದ್ದಾಗ ನಡೆದದ್ದು ಇಷ್ಟು ; ಚಿಕ್ಕನಾಯಕನಹಳ್ಳಿಗೆ ತೆಂಗಿನಕಾಯಿ ತುಂಬಿಕೊಂಡು ಹೋಗಿದ್ದ ಕೆಲವು ರೈತರು ತಿಂಗಳ
ಬೆಳಕಿನಲ್ಲಿ ಗಾಡಿ ಹೊಡೆದುಕೊಂಡು ತಮ್ಮ ಹಳ್ಳಿಗೆ ಹಿಂದಿರುಗಿ ಬರುತ್ತಿದ್ದರು. ಶಾನುಭೋಗರು ಬಿದ್ದ ಸ್ಥಳಕ್ಕೆ ಕಾಲು ಹರಿದಾರಿಯಿದೆ ಎನ್ನುವಾಗ
ಹುಲಿಯ ಗರ್ಜನೆ ಕೇಳಿಸಿತು. ಎತ್ತುಗಳು ಕಣಿ ಹಾಕಿಕೊಂಡು ನಿಂತವು. ಅತ್ತ ಎತ್ತುಗಳ ಘಂಟೆಯ ಶಬ್ದ ಮತ್ತು ರೈತರ ಮಾತು ಕೇಳಿ
ನಿರಾಶೆಯಿಂದಲೂ ಕೋಪದಿಂದಲೂ ಗರ್ಜಿಸಿ ಪಲಾಯನ ಮಾಡಿತು. ಗಾಡಿಯವರು ಸ್ವಲ್ಪ ಹೊತ್ತು ಗಾಡಿಯ ಬಳಿಯಲ್ಲೇ ನಿಂತು ನೋಡಿದಗ .
ಮತ್ತೆ ಗರ್ಜನೆ ಕೇಳಲಿಲ್ಲ. ಅನಂತರ ಅವರು ತಮ್ಮಲ್ಲಿದ್ದ ಕೋವಿಯಿಂದ ಒಂದೆರಡು ತೋಟಾ ಹಾರಿಸಿ, ಕೈಲಾದಷ್ಟು ಗಲಭೆ ಮಾಡುತ್ತಾ
ತೆಂಗಿನಗರಿಯ ಪಂಜು ಹೊತ್ತಿಸಿಕೊಂಡು ಮೂರ್ಛೆಯಲ್ಲಿ ಬಿದ್ದಿದ್ದ ಶಾನುಭೋಗರನ್ನು ಕಂಡು ಮುಖದ ಮೇಲೆ ನೀರೆರಚಿ ಎಚರಿ್ಚ ಸಿದರು.
ಇ) ಕೊಟ್ಟಿರುವ ಪ್ರಶ್ನೆಗಳಿಗೆ ಎಂಟು-ಹತ್ತು ವಾಕ್ಯಗಳಲ್ಲಿ ಉತ್ತರಿಸಿ.👇👇👇👇👇👇👇👇👇👇👇👇👇👇👇👇👇👇👇
1. ಮೂರ್ತಿರಾಯರ ದೃಷ್ಟಿಯಲ್ಲಿ ಹುಲಿಯು ಬೇಟೆಯಾಡುವ ಬಗೆಯನ್ನು ವಿವರಿಸಿ.
ಹುಲಿ ಎಂದರೆ ಕ್ರೂರಪ್ರಾಣಿ ಕೊಂದು ತಿನ್ನುವುದೊಂದೆ ಅದರ ಸ್ವಭಾವ ಎಂದು ಭಾವಿಸುವವರು ಸಾಕಷ್ಟು ಜನರಿದ್ದಾರೆ. ಆದರೆ ಹುಲಿ ಆಹಾರಕ್ಕಾಗಿಬೇಟೆಯಾಡಿ ಪ್ರಾಣಿಗಳನ್ನು ಕೊಂದು ತಿನ್ನುವುದೇನೋ ಉಂಟು. ಆದರೆ ನಿಷ್ಪಕ್ಷಪಾತವಾದ ದೃಷ್ಟಿಯಿಂದ ನೋಡಿದರೆ ಅದರಲ್ಲಿ ತಪ್ಪೇನು ಇಲ್ಲ.ಯಾಕೆಂದರೆ ಅವು ಮೂಲತಃ ಮಾಂಸಹಾರಿಗಳು. ಶಾಕಾಹಾರವನ್ನು ತಿಂದು ಬದುಕಬಹುದಾದ ಮಾನವನೇ ಮಾಂಸವನ್ನು ತಿನ್ನಬಹುದಾದರೆಮಾಂಸಹಾರಿಯಾದ ಹುಲಿಯಲ್ಲಿ ಅದೊಂದು ದೊಡ್ಡ ಅಪರಾಧವೇನಲ್ಲ. ಅದು ಆಹಾರಕ್ಕಾಗಿ ಪ್ರಾಣಿಗಳನ್ನು ಕೊಲ್ಲುವುದರಲ್ಲೇನೂ ತಪ್ಪಿಲ್ಲ. ಆದರೆಹಾಗೆ ಕೊಲ್ಲುವಾಗ ಯಾವುದಾದರೊಂದು ಧರ್ಮವನ್ನು ಅನುಸರಿಸಿ ಕೊಲ್ಲುತ್ತದೆಯೇ ಅಥವಾ ಧರ್ಮಾಧರ್ಮಗಳ ಲೆಕ್ಕವನ್ನೇ ಇಡದೆ ಸ್ವಚ್ಛಂದದಿಂದ ವರ್ತಿಸುತ್ತದೆಯೇ ಎಂಬುದೇ ಇಲ್ಲಿ ಮುಖ್ಯ ಪ್ರಶ್ನೆ . ಹುಲಿಗೆ ಧರ್ಮವೇನು ಬಂತು ಎನ್ನಬಹುದು. ಇತರ ದೇಶಗಳಲ್ಲಿರುವ ಹುಲಿಗಳ ವಿಷಯ ಹೇಗೋ ನನಗೆ ತಿಳಿಯದು ಆದರೆ ¨ಭರತಖಂಡದ ಹುಲಿಗಳ ಧರ್ಮಶ್ರದ್ದೆಯನ್ನು ಅನುಸರಿಸಿ ಬೇಟೆಯಾಡುತ್ತವೆ. ಯಾವನಾಡಿನಲ್ಲಿ ಶ್ರೀರಾಮನಂಥ ದೊರೆಗಳು ಆಳಿದರೋ, ಮಹರ್ಷಿ ವೇದವ್ಯಾಸರಿಂದ ರಚಿತವಾದ ¨ಭಗದ್ಗೀತೆಯಂಥ ಗ್ರಂಥ ಉದ್ಭವಿಸಿತೋ, ಇಂತಹ ಈ ¨ಭರತ ಭೂಮಿಯಲ್ಲಿ ಜನಿಸಿದ ಹುಲಿಗಳು ಅಧರ್ಮದಿಂದ ನಡೆದುಕೊಳ್ಳುವುದಿಲ್ಲ. ಯಾರನ್ನೇ ಆಗಲಿ, ¨ಭರತ ಖಂಡದ ಹುಲಿಗಳು ಹಿಂದಿ ನಿಂದ ಹಾರಿ ಕೊಲ್ಲುವುದಿಲ್ಲ. ಶತ್ರುವನ್ನಾದರೂ ಸರಿಯೆ, ಆತ ಬೆನ್ನು ತಿರುಗಿಸಿರುವಾಗ ಕೊಲ್ಲುವುದು ಧರ್ಮವಲ್ಲ. ಆದ್ದರಿಂದಲೇ ಹುಲಿಯು ಶಾನುಭೋಗರನ್ನು ಹಿಂದಿನಿಂದ ಹಾರಿ ಕೊಲ್ಲಲಿಲ್ಲ ಎಂದು ಮೂರ್ತಿರಾಯರು ಹುಲಿ ಬೇಟಿಯಾಡುವ ಬಗೆಯನ್ನು ವಿವರಿಸಿದ್ದಾರೆ.
2. ಶಾನುಭೋಗರನ್ನು ರಕ್ಷಿಸಿದುದು ಖಿರ್ದಿ ಪುಸ್ತಕವೇ? ಹುಲಿಯ ಧರ್ಮವೇ? ಸಮರ್ಥನೆಯೊಂದಿಗೆ ವಿವರಿಸಿ.
ಹುಲಿಯ ಗಮನವನ್ನು ಬೇರೆಡೆಗೆ ಸೆಳೆದ ಅರೆ ನಿಮಿಷದ ಅವಕಾಶವನ್ನು ಒದಗಿಸಿಕೊಟ್ಟು ನನ್ನ ಪ್ರಾಣವನ್ನು ರಕ್ಷಿಸಿದ್ದು ಖಿರ್ದಿಪುಸ್ತವೆಂದು
ತಿಳಿದು ಅದಕ್ಕೆ ಅನಂತವಾತ್ಸಲ್ಯದಿಂದ ,
ಕೃತಜ್ಞತೆಯನ್ನು ಸಲ್ಲಿಸಿದ ಶಾನುಭೋಗರ ಮನಸ್ಸನ್ನು ಗಮಿಸಿದರೆ ಖಿರ್ದಿಪುಸ್ತಕವೇ ನನ್ನನ್ನು ರಕ್ಷಿಸಿತುಎಂದು ತಿಳಿದಿದ್ದಾರೆ. ಆದರೆ ನಿಜವಾಗಿ ನೋಡಿದರೆ ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ , ಹುಲಿಯಧರ್ಮ ಶ್ರದ್ದೆಯಿಂದ ಎಂದುಹೇಳಬಹುದು. ಏಕೆಂದರೆ ಅವರ ದುಂಡುದುಂಡಾದ ಶರೀರವನ್ನು ನೋಡಿದ ಹುಲಿ ಅವರು ಬೆನ್ನು ತಿರುಗಿಸಿ ನಡೆಯುತ್ತಿದ್ದರೂ ಮೇಲೆ ಬಿದ್ದು
ಕೊಲ್ಲಬಹುದಾಗಿತ್ತು. ಶಾನುಭೋರು ಎಚ್ಚರ ತಪ್ಪಿ ಕೆಳೆಗೆ ಬಿದ್ದಾಗ ಅವಅವರನ್ನು ಎಳೆದುಕೊಂಡು ಹೋಗಿ ತಿನ್ನಬಹುದಿತ್ತು. ಆದರೆ ಅದು ಹಾಗೆ
ಮಾಡಲಿಲ್ಲ. ಏಕೆಂದರೆ ¨ಭರತ ಖಂಡದ ಹುಲಿಗಳು ಶತ್ರುವನ್ನಾದರೂ ಸರಿ ಬೆನ್ನ ಹಿಂದಿನಿಂದ ಹಾರಿ ಕೊಲ್ಲವುದು ಧರ್ಮವಲ್ಲ. ಶಾನುಭೋಗರು
ಬೆನ್ನ ಮೇಲೆ ಮಾಡಿ ಬಿದ್ದಿದ್ದರಿಂದ ಹುಲಿಯು ಅವರನ್ನು ತಿನ್ನದೆ ಬಿಟ್ಟಿತು. ಅದು ಕೊನೆಯವರೆಗೂ
ಅನುಸರಿಸಿತು.ಆದ್ದರಿಂದ ಶಾನುಭೊಗರನ್ನು ರಕ್ಷಿಸಿದ್ದು ಹುಲಿಯ ಧರ್ಮವೇ ಎಂದು ಸಮರ್ಥವಾಗಿ ಹೇಳಬಹುದು.
ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.
1.“ಖಂಡವಿದೆಕೋ, ಮಾಂಸವಿದೆಕೋ
ಗುಂಡಿಗೆಯ ಬಿಸಿರಕ್ತವಿದೆಕೋ.”.
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಹುಲಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ ಬಿದ್ದೇ ಬಿಡಲೆ ಎಂದು ಅದರ
ಮನಸಿನಲ್ಲಿ ಗೊಂದಲ. ಆದರೆ ಆ ಗೊಂದಲ ಕ್ಷಣಕಾಲಕ್ಕಿಂತಲೂ ಹೆಚ್ಚಾಗಿ ನಿಲ್ಲಲಿಲ್ಲ. ಅದು ಸದ್ವಂಶದಲ್ಲಿ ಜನಿಸಿದ ಹುಲಿ. “ಖಂಡವಿದೆಕೋ,
ಮಾAಸವಿದೆಕೋ, ಗುಂಡಿಗೆಯ ಬಿಸಿರಕ್ತವಿದೆಕೋ” ಎಂದು ಆ ಪುಣ್ಯಕೋಟಿ ಹಸು ಆಹ್ವಾನ ಕೊಟ್ಟಾಗ ತನ್ನ ಅಜ್ಜ ಬಾಯಿ ಚಪ್ಪರಿಸಿಕೊಂಡು
ಹಸುವನ್ನು ತಿನ್ನಬಹುದಾಗಿತ್ತು. ಆದರೂ ಆ ಹುಲಿರಾಯ ಸತ್ಯವ್ರತೆಯಾದ ಪುಣ್ಯಕೋಟಿಯನ್ನು ತಿನ್ನದೆ ಪ್ರಾಣಬಿಟ್ಟಿತು. ಅಂಥ ಹುಲಿಯ
ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಕೈ ಹಾಕುವುದೆ? ಎಂದು ಹುಲಿ ಯೋಚಿಸಿದ ಸಂದರ್ಭವಾಗಿದೆ.
ಸ್ವಾರಸ್ಯ : ಪುಣ್ಯಕೋಟಿ ಕಥೆಯಲ್ಲಿನ ವ್ಯಾಘ್ರನ ಆದರ್ಶ ತನಗೂ ಮಾದರಿಯಾದದ್ದು ಎಂಬ ಈ ಹುಲಿಯ ಚಿಂತನೆ
ಧರ್ಮಶ್ರದ್ದೆಯನ್ನು ಸ್ವಾರಸ್ಯಪೂರ್ಣವಾಗಿ ಅಭಿವ್ಯಕ್ತಪಡಿಸುತ್ತದೆ.
2.“ಸ್ವಧರ್ಮೇ ನಿಧನಂ ಶ್ರೇಯಃ ”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ :ಹಹುಲಿ ಶಾನುಭೋಗರಿಗೆ ಅಭಿಮುಖವಾಗಿ ಬರಬೇಕೆಂದು ಪ್ರಯತ್ನಿಸಿ ವಿಫಲವಾದಾಗ ಬೆನ್ನ ಹಿಂದಿನಿಂದ ಬಿದ್ದೇ ಬಿಡಲೆ ಎಂದು ಅದರ
ಮನಸ್ಸಿನಲ್ಲಿ ಬಂದಾಗ ಪುಣ್ಯಕೋಟಿ ಕಥೆಯ ತನ್ನ ಅಜ್ಜನ ಆದರ್ಶ ನೆನಪಿಸಿಕೊಂಡು, ಅಂಥ ಹುಲಿಯ ಮೊಮ್ಮಗನಾಗಿ ಹುಟ್ಟಿ ತಾನು ಅಧರ್ಮಕ್ಕೆ ಹಾಕುವುದೆ? ಛೇ ಇಲ್ಲ ! ಎಂದುಕೊಂಡಾಗ ಹುಲಿಗೆ ¨ಭಗವದ್ಗೀತೆಯ ಸ್ವಧರ್ಮೇ ನಿಧನಂ ಶ್ರೇಯಃ ಎಂಬ ವಾಕ್ಯ ನೆನಪಿಗೆ ಬಂದ ಸಂದರ್ಭವಾಗಿದೆ.
ಸ್ವಾರಸ್ಯ : ಹುಲಿ ತನ್ನ ಧರ್ಮಶ್ರದ್ಧೆಯನ್ನು
ಬಿಡಬಾರದು. ಧರ್ಮಮಾರ್ಗದಿಂದ ನೆಡೇಯಬೇಕು , ಸ್ವಧರ್ಮವನ್ನು ಅಅನುಸರಿಸಿ ನಿಧನ ಹೊಂದುವುದೇಶ್ರೇಯಸ್ಕರ ಎಂದು ಚಿಂತಿಸುವುದು ಸ್ವಾರಸ್ಯಪೂರ್ಣವಾಗಿದೆ.
3.“ದೇವರೆ, ಮರ ಹತ್ತುವಷ್ಟು ಅವಕಾಶ ಕರುಣಿಸು.”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಸಂದರ್ಭ : ಶಾನುಭೋಗರು ಖಿರ್ದಿ ಪುಸ್ತಕವನ್ನು ಹುಲಿಯ ಮುಖಕ್ಕೆ ಎಸೆದಾಗ ಅದರ ಮುಖಕ್ಕೆ ಬಂದು ಬಡಿಯಿತು. ಆದರೆ ಹುಲಿಗೆ ಪೆಟ್ಟೇನೂ
ಆಗಲಿಲ್ಲ ಎಂಬುದು ಶಾನುಭೋಗರ ಮನಸ್ಸಿಗೆ ಅರಿವಾಗಲು ಅರೆನಿಮಿಷ ಹಿಡಿಯಿತು. ಆ ಅರೆ ನಿಮಿಷದಲ್ಲಿ ಶಾನುಭೋಗರು “ದೇವರೆ, ಮರ
ಹತ್ತುವಷ್ಟು ಅವಕಾಶ ಕರುಣಿಸು” ಎನ್ನುತ್ತಾ ಒಂದೇ ಉಸಿರಿನಲ್ಲಿ ಮರದ ಕಡೆಗೆ ಧಾವಿಸಿದ ಸಂದರ್ಭವಾಗಿದೆ .
ಸ್ವಾರಸ್ಯ : ಶಾನುಭೋಗರು ಹುಲಿಯಿಂದ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಡು ಎಂದು ದೇವರನ್ನು ಪ್ರಾರ್ಥಿಸುವುದು ಬಹು
ಸ್ವಾರಸ್ಯಪೂರ್ಣವಾಗಿದೆ
4.“ನಾನು ಮುಖ ಮೇಲಾಗಿ ಬಿದ್ದಿದ್ದೆನೆ?”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಈ ಮಾತನ್ನು ಶಾನುಭೋಗರು ಗಾಡಿಯವರಿಗೆ ಕೇಳಿದರು . ಶಾನುಭೋಗರು ಪ್ರಜ್ಞೆತಪ್ಪಿ ಬಿದ್ದಿದ್ದಾಗ ಅದೇ ದಾರಿಯಲ್ಲಿ ಗಾಡಿಯಲ್ಲಿ
ಹೋಗುತ್ತಿದ್ದ ರೈತರು ಅವರ ಮುಖದ ಮೇಲೆ ನೀರೆರಚಿ ಎಚ್ಚರಿಸಿದ ಸಂದರ್ಭದಲ್ಲಿ ಅವರ ಮನಸ್ಸನ್ನೆಲ್ಲಾ ವಿಸ್ಮಯ ಆವರಿಸಿತ್ತು. ತಾವು ಉಳಿದದ್ದು
ಹೇಗೆ? ನಿಸ್ಸಹಾಯರಾಗಿ ಪ್ರಜ್ಞೆಯಿಲ್ಲದೆ ಬಿದ್ದಿದ್ದಾಗ ಹುಲಿ ತಮ್ಮನ್ನು ಎಳೆದುಕೊಂಡು ಹೋಗಲಿಲ್ಲವೇಕೆ? ಎಂದು ಸ್ವಲ್ಪ ಹೊತ್ತು ಯೋಚಿಸಿ
ಗಾಡಿಯವರನ್ನು “ನಾನನಾನು ಮುಖ ಮೇಲಾಗಿ ಬಿದ್ದಿದ್ದೆನೆ?” ಎಂದು ಕೇಳಿದ ಸಂದರ್ಭವಾಗಿದೆ.
ಸ್ವಾರಸ್ಯ : ನಾನು ಪ್ರಜ್ಞೆ ತಪ್ಪಿ ಬಿದ್ದಿದ್ದಾಗ ಹುಲಿಯು ಏಕೆ ಎಳೆದುಕೊಂಡು ಹೋಗಲಿಲ್ಲ ಎಂಬ ಸಮಸ್ಯೆಗೆ ಶಾನುಭೋಗರು ಕೊನೆಯವರೆಗೂ
ಆಪ್ರಾಣಿ ತನ್ನ ಕುಲಧರ್ಮವನ್ನು ಪಾಲಿಸಿಕೊಂಡೇ ಬಂದಿದೆ ಎಂಬ ಉತ್ತರ ಕಂಡುಕೊಳ್ಳುವುದು ಇಲ್ಲಿ ಸ್ವಾರಸ್ಯಪೂರ್ಣವಾಗಿ ಮೂಡಿಬಂದಿದೆ.
5. “ಹುಲಿ ಈಗ ಎಷ್ಟು ಹಸಿದಿರಬೇಕು.”
ಆಯ್ಕೆ : ಈ ವಾಕ್ಯವನ್ನು ಎ. ಎನ್. ಮೂರ್ತಿರಾವ್ ಅವರ ಸಮಗ್ರ ಲಲಿತ ಪ್ರಬಂಧಗಳು ಎಂಬ ಸಂಕಲನದಿಂದ ಆಯ್ದ ವ್ಯಾಘ್ರಗೀತೆ ಎಂಬ
ಪಾಠದಿಂದ ಆರಿಸಿಕೊಳ್ಳಲಾಗಿದೆ.
ಸಂದರ್ಭ : ಶಾನುಭೋಗರು ಹುಲಿಯಿಂದ ತಪ್ಪಿಸಿಕೊಂಡು ಜೀವ ಸಹಿತ ಮನೆ ಸೇರಿಕೊಂಡು ರಸದೊಟವನ್ನು ಮಾಡುವ ಸಂದರ್ಭದಲ್ಲಿ “ಹುಲಿ ಈಗ ಎಷ್ಟು ಹಸಿದಿರಬೇಕು” ಎಂಬ ಯೋಚನೆ ಮೂಡಿ ಅವರ ವದನಾರವಿಂದಲ್ಲಿ ಮುಗುಳುನಗೆ ಮೂಡಿದ ಸಂದರ್ಭವಾಗಿದೆ
ಸ್ವಾರಸ್ಯ : ನಾನು ಹುಲಿಯಿಂದ ತಪ್ಪಿಸಿಕೊಂಡು ಬಂದು ರಸದೂಟವನ್ನು ಮಾಡುತ್ತಿದ್ದೇನೆ ಆದರೆ ನನ್ನನ್ನು ಬಿಟ್ಟ ಆ ಹುಲಿ ಹಸಿವಿನಿಂದ
ಬಳಲುತ್ತಿರಬಹುದು ಎಂದು ಶಾನುಭೋಗರು ನೆನೆಯುವುದು ಸ್ವಾರಸ್ಯಪೂರ್ಣವಾಗಿದೆ.
ಭಾಷಾ ಚಟುವಟಿಕೆ
ಉ) ಬಿಟ್ಟಿರುವ ಸ್ಥಳಗಳನ್ನು ಸೂಕ್ತ ಪದಗಳಿಂದ ತುಂಬಿ.
1. ಮಂತ್ರಿತ್ವ ಹೋಗಿ ಕೇವಲ ಶಾನುಭೋಗಿಕೆ ಮಾತ್ರ ಉಳಿದಿತ್ತು.
2. ಖಿರ್ದಿ ಪುಸ್ತಕ ಶಾನುಭೋಗರ ಬ್ರಹ್ಮಸ್ತ್ರ .
3. ನೆಲದಿಂದ ಮೇಲೆದ್ದುಕೊಂಡಿದ್ದ ಕಲ್ಲನ್ನು ಎಡವಿ ಶಾನುಭೋಗರು ಬಿದ್ದರು.
4. ರೈತರು ತಿಂಗಳ ಬೆಳಕಿನಲ್ಲಿ ಗಾಡಿ ಹೊಡೆಯುತ್ತಿದ್ದರು.
5. ಶಾನುಭೋಗರು ಉಳಿದದ್ದು ಖಿರ್ದಿ ಪುಸ್ತಕದಿಂದಲ್ಲ.





No comments:
Post a Comment