Sunday, November 5, 2023

Petition for rectification of aided high school teachers' problems

  Wisdom News       Sunday, November 5, 2023
Hedding ; Petition for rectification of aided high school teachers' problems...

ಅನುದಾನಿತ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಹೋರಾಟ’

ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರದ ಮೇಲೆ ಒತ್ತಡ ಹೇರಲು ಸದನದ ಒಳಗೆ ಮತ್ತು ಹೊರಗೆ ಪಕ್ಷಬೇಧ ಮರೆತು ಹೋರಾಟ ನಡೆಸುವ ಮೂಲಕ ನ್ಯಾಯವನ್ನು ದೊರಕಿಸಿಕೊಡಲು ಅವಿರತ ಪ್ರಯತ್ನ ಮಾಡುತ್ತೇವೆ ಎಂದು ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಮತ್ತು ಅಮರನಾಥ ಪಾಟೀಲ್ ಮಹಾಗಾಂವ ಘೋಷಣೆ ಮಾಡಿದರು.

ಖಾಸಗಿ ಅನುದಾನಿತ ಶಾಲೆಗಳ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸರಕಾರದ ಮೇಲೆ ಒತ್ತಡ ಹೇರಲು ಸದನದ ಒಳಗೆ ಮತ್ತು ಹೊರಗೆ ಪಕ್ಷಬೇಧ ಮರೆತು ಹೋರಾಟ ನಡೆಸುವ ಮೂಲಕ ನ್ಯಾಯವನ್ನು ದೊರಕಿಸಿಕೊಡಲು ಅವಿರತ ಪ್ರಯತ್ನ ಮಾಡುತ್ತೇವೆ ಎಂದು ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ಮತ್ತು ಅಮರನಾಥ ಪಾಟೀಲ್ ಮಹಾಗಾಂವ ಘೋಷಣೆ ಮಾಡಿದರು.

ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಗುಲ್ಬರ್ಗ ಉತ್ತರ ಮತ್ತು ದಕ್ಷಿಣ ವಲಯ ಘಟಕಗಳು ಸಂಯುಕ್ತವಾಗಿ ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸದಾ ನಿಮ್ಮ ಜತೆಗೆ ಇರುತ್ತೇವೆ, ಆಡಳಿತ ಮಂಡಳಿಗಳೂ ಕಿರುಕುಳ ನೀಡಿದರೂ ಸುಮ್ಮನೆ ಇರಲ್ಲ ಎಂದು ಅಭಯ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಸಕ ರೇವೂರ, ಅನುದಾನಿತ ಶಿಕ್ಷಕರು ಮೇಲಿಂದ ಮೇಲೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಒಂದೆಡೆ ಸರಕಾರ ದಿನಕ್ಕೊಂದು ನೀತಿಗಳನ್ನು ಮಾಡಿ ತೊಂದರೆ ನೀಡುತ್ತಿದ್ದರೆ, ಆಡಳಿತ ಮಂಡಳಿಯವರು ಒತ್ತಡ ಹೇರುವ ಮೂಲಕ ಸಂದಿಗ್ಧ ಸ್ಥಿತಿಗೆ ಸಿಲುಕಿಸುತ್ತಿದ್ದಾರೆ. ಇತ್ತ ಸಂಬಳವೂ ಸಕಾಲಕ್ಕೆ ಬಾರದೆ ಇದರಿಂದ ಸದಾ ಒತ್ತಡದಲ್ಲಿರುವಂತಿದೆ ಎಂದರು.

ಪ್ರಧಾನಿ ನರೇಂದ್ರಮೋದಿ ಹೇಳಿದಂತೆ ಬಲಿಷ್ಠ ದೇಶವನ್ನು ನಿರ್ಮಿಸುವ ಶಕ್ತಿ, ಶಿಕ್ಷಕರಲ್ಲಿ ಮತ್ತು ಯುವಕರಲ್ಲಿ ಮಾತ್ರವಿದೆ,ಅದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಶಿಕ್ಷಕರು ಮಕ್ಕಳಲ್ಲಿ ಪ್ರತಿಭೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕು, ಗುಣಮಟ್ಟದಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.

ಅನುದಾನಿತ ಶಾಲೆಗಳ ಶಿಕ್ಷಕರನ್ನು ಹೊರಗಿಟ್ಟು ಶಿಕ್ಷಕರ ದಿನಾಚರಣೆ ಮಾಡಿದ್ದರಿಂದಲೇ ಪ್ರತ್ಯೇಕವಾಗಿ ಆಚರಿಸುವಂತಾಗಿದೆ.ಹೀಗಾಗಿ ಮುಂದಿನ ವರ್ಷದಿಂದ ಇವರನ್ನು ಸೇರಿಸಿಕೊಂಡು ಕಾರ್ಯಕ್ರಮ ನಡೆಸಬೇಕು ಎಂದು ಡಿಡಿಪಿಐಗೆ ರೇವೂರಗೌಡರು ಸೂಚಿಸಿದರು.

ಸಂಘದ ರಾಜ್ಯಾಧ್ಯಕ್ಷ ಪ್ರಕಾಶ ಮೂರ್ತಿ,ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ, ಡಿಡಿಪಿಐ ಕೆ.ಕೆ.ಹನುಮಂತಪ್ಪ, ಖಜಾನೆ ಉಪನಿರ್ದೇಶಕ ಟಿ.ವಿನಯಕುಮಾರ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಹನುಮಂತಪ್ಪ, ಅಧಿಕಾರಿ ಮಲ್ಲಣ್ಣ ಮಡಿವಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬಾಜಿ ಕವಲಗಾ, ಅಧ್ಯಕ್ಷರಾದ ಹಣಮಂತರಾವ ಬೇಮಳಗಿ, ಶಂಕರರಾವ ಪವಾರ, ಕಾರ್ಯದರ್ಶಿಗಳಾದ ಭಾನುಕುಮಾರ ಗಿರೇಗೋಳ, ಅಂಬಾದಾಸ ಪಾಟೀಲ್, ಎಸ್.ಎಸ್.ಪಾಟೀಲ್ ಮೊದಲಾದವರು ವೇದಿಕೆಯಲ್ಲಿದ್ದರು.

ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಮಲ್ಲಿನಾಥ ದಂಡಪ್ಪಗೋಳ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ವಲಿ ಅಹ್ಮದ್, ಸುಮನ ಕಟಕೆ, ಶಶಿಕಲಾ ರೇವೂರೆ, ನೀಲಮ್ಮ ಧನಶೆಟ್ಟಿ, ಚಂದ್ರಕಾಂತ ಬಿರಾದಾರ, ಮಲ್ಲೇಶಪ್ಪ ಕಟ್ಟಿಮನಿ, ಕೌಸರ್ ಸುಲ್ತಾನ್, ಮಲ್ಲಮ್ಮ ಸ್ವಾಮಿ, ಶಕುಂತಲಾ, ಪ್ರಶಾಂತಿನಿ ಕುಲಕರ್ಣಿ, ಗುಂಡಪ್ಪ ನಾಟೀಕಾರ ಸೇರಿದಂತೆ ಅನೇಕರನ್ನು ಸನ್ಮಾನಿಸಲಾಯಿತು.

ಕಾಲ್ಪನಿಕ ವೇತನ ಬಿಡುಗಡೆ ಕಾಲ ಸನ್ನಿಹಿತ

ಅನುದಾನಿತ ಶಾಲೆಗಳ ಶಿಕ್ಷಕ ಬಹುದಿನಗಳ ಬೇಡಿಕೆಯಾದ ಕಾಲ್ಪನಿಕ ವೇತನ ಬಿಡುಗಡೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ವಿಧಾನ ಪರಿಷತ್‌ಸದಸ್ಯ ಅಮರನಾಥ ಪಾಟೀಲ್ ಹೇಳಿದರು. ಈ ಕುರಿತು ಸದನ ಸಮಿತಿಯ ಸಭೆ ಹಲವು ಸಲ ನಡೆದಿದ್ದು ತಾವು ಸಹ ಅದರಲ್ಲಿ ಭಾಗವಹಿಸಿದ್ದು, ಅಧಿಕಾರಿಗಳು ಒಪ್ಪಿಗೆ ನೀಡುವ ಹಂತದಲ್ಲಿದ್ದಾರೆ.ಆದರೆ ಅದರ ಮೊತ್ತ ಹೆಚ್ಚಳವಾಗಿದ್ದರಿಂದ ಕೊಂಚ ವಿಳಂಬವಾಗಿದೆ ಎಂದರು.

ಅನುದಾನಿತ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪ್ರಕಾಶ ಮೂರ್ತಿ ಮಾತನಾಡಿ, ಶೀಘ್ರವೇ ನಮ್ಮೆಲ್ಲರ ಬೇಡಿಕೆ ಈಡೇರಲಿದೆ. ಕಾಲ್ಪನಿಕ ವೇತನ ಸಿಗುತ್ತದೆ ಆದರೆ, ಬಾಕಿ (ಅರಿಯರ್ಸ್‌) ಕೇಳಬೇಡಿ ಎಂದು ಶಿಕ್ಷಕರಿಗೆ ಕಿವಿಮಾತು ಹೇಳಿದರು. ಎಲ್ಲ ಜಿಲ್ಲೆಗಳಿಂದ ಪ್ರಸ್ತಾವನೆಯನ್ನು ತರಿಸಿಕೊಂಡು ಎಲ್ಲ ಸಿದ್ಧತೆಗಳನ್ನು ಸರಕಾರ ಮಾಡಿಕೊಳ್ಳುತ್ತಿದೆ ಎಂದು ತಿಳಿಸಿದರು.

ಆಂಗ್ಲ ಶಾಲೆಗಳಿಗೆ ಪೈಪೋಟಿ ನೀಡಬೇಕು

ಅನುದಾನಿತ ಶಾಲೆಗಳು ತಮ್ಮಸುತ್ತಲಿರುವ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಪೈಪೋಟಿ ನೀಡುವಂತೆ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸರಕಾರಿ ನೌಕರರ ಸಂಘದ ಅಧ್ಯಕ್ಷ ರಾಜು ಲೆಂಗಟಿ ಹೇಳಿದರು. ಅನುದಾನಿತ ಶಾಲೆಗಳ ಬಗ್ಗೆ ಜನರಲ್ಲಿ ತಾತ್ಸಾರ ಭಾವನೆಯಿದೆ ಅದನ್ನು ಹೋಗಲಾಡಿಸಲು ಶಿಕ್ಷಕರು ನಿರಂತರ ಅಧ್ಯಯನವನ್ನು ಮಾಡುವ ಮೂಲಕ ಪರಿಣಿತಿಯನ್ನು ವೃದ್ಧಿಸಿಕೊಂಡು ಮಕ್ಕಳಿಗೆ ಭಾರಿ ಗುಣಮಟ್ಟದ ಕಲಿಕಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶಿಕ್ಷಕರು ಮಕ್ಕಳನ್ನು ದಂಡಿಸದೆ ಕಲಿಸುವುದು ಕೊಂಚ ಕಷ್ಟವೇ ಆಗಿದೆ, ಮಕ್ಕಳಿಗೆ ದಂಡಿಸಿದರೆ ಬಂದು ಕೇಳುವ ಪೋಷಕರ ಪ್ರಮಾಣ ಶೇ.10ರಷ್ಟು ಮಾತ್ರ, ಹೀಗಾಗಿ ಉಳಿದ ಮಕ್ಕಳ ಭವಿಷ್ಯ ಮಂಕಾದಂತೆ ಶಿಕ್ಷಕರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.




logoblog

Thanks for reading Petition for rectification of aided high school teachers' problems

Previous
« Prev Post

No comments:

Post a Comment