*ನನ್ನ ಪ್ರೀತಿಯ ಮುದ್ದು SSLC ವಿದ್ಯಾರ್ಥಿಗಳೇ*
*ಹಿಂದಿ ವಿಷಯದ ಪ್ರಶ್ನೆ ಪತ್ರಿಕೆ ವಿನ್ಯಾಸ ಹೀಗೆ ಇರಬಹುದು. ಇದು ನನ್ನ ವೈಯಕ್ತಿಕ ವಿಚಾರವಾಗಿದೆ.*
*व्याकरण भाग*
1. लिंग ।
2. विलोम ।
3. प्रथम प्रेरणार्थक ।
4. वचन ।
5. संधि ।
6. समास ।
7. विराम चिह्न ।
8. कारक ।
*व्याकरण भाग (वस्तुनिष्ठ) में कुल 08 प्रश्न और 08 अंक*
*गद्य भाग*
1. कश्मीरी सेब - 1 (अनुरूपता) + दो अंक का प्रश्न - कुल - 3 अंक ।
2. गिल्लू - तीन या चार अंक का प्रश्न - कुल - 3 या 4 अंक ।
3. मेरा बचपन - 1 (अनुरूपता) + दो अंक का प्रश्न - कुल - 3 अंक ।
4. बसंत की सच्चाई - तीन या चार अंक का प्रश्न - कुल - 3 या 4 अंक ।
5. इंटरनेट क्रांति - तीन अंक का प्रश्न - कुल - 3 अंक ।
6. ईमानदारों के सम्मेलन में - 1 (अनुरूपता) + एक अंक का प्रश्न या तीन अंक का प्रश्न - कुल - 2 या 3 अंक ।
*Nabi Sir GHS Kinnisultan, Tq. Aland*
7. दुनिया में पहला मकान- एक अनुरूपता और एक अंक का प्रश्न या दो अंक का एक प्रश्न - कुल - 2 अंक ।
8. रोबोट - तीन अंक का प्रश्न - कुल - 3 अंक ।
9. महिला की साहस गाथा - तीन अंक का प्रश्न - कुल - 3 अंक ।
10. कर्नाटक संपदा - तीन या चार अंक का प्रश्न - कुल - 3 या 4 अंक ।
11. बालशक्ति - दो या तीन अंक का प्रश्न - कुल - 2 या 3 अंक ।
*गद्य भाग में कुल 15 प्रश्न और 32 अंक ।*
👆👆👆👆👆
*पूरक वाचन*
1. शनि सबसे सुंदर ग्रह - दो अंक का प्रश्न - 02 अंक ।
2. सत्य की महिमा - दो अंक का प्रश्न - 02 अंक ।
3. नागरिक के कर्तव्य - एक प्रश्न - 02 अंक ।
*इन तीनों में से कोई भी दो प्रश्न को लिखना है*
*पूरक वाचन में कुल 2 प्रश्न और 4 अंक ।*
*Nabi Sir GHS Kinnisultana, Tq. Aland.*
*पद्य भाग*
1. मातृभूमि - एक अंक + दो अंक या तीन अंक का एक प्रश्न - कुल - 03 अंक ।
2. अभिनव मनुष्य - एक अंक का प्रश्न + दो अंक का प्रश्न या तीन अंक का प्रश्न एक ही प्रश्न - कुल - 03 अंक ।
3. तुलसी के दोहे - एक अंक का प्रश्न + तीन अंक का प्रश्न (भावार्थ) - कुल - 04 अंक ।
4. समय की पहचान - दो या तीन अंक का प्रश्न - कुल - 02 या 03 अंक ।
5. सूर श्याम - एक अंक का अनुरूपता प्रश्न + दो अंक का प्रश्न - कुल - 03 अंक ।
6. कोशिश करनेवालों की कभी हार नहीं होती - चार अंक का प्रश्न (पद्य भाग को पूर्ण कीजिए)- कुल - 04 अंक ।
*पद्य भाग में कुल 09 प्रश्न और 20 अंक ।*
👆👆👆👆👆
*रचना भाग*
1. कन्नड़ या अंग्रेजी में अनुवाद कीजिए (शनि सबसे सुंदर ग्रह, कर्नाटक संपदा , ईमानदारों के सम्मेलन में, गिल्लू और दुनिया में पहला मकान पाठ से) - 3 अंक का प्रश्न ए कुल - 03 अंक ।
2. गद्यांश को पढ़कर प्रश्नों के उत्तर लिखिए - 4 अंक ।
3. निबंध -
क. जनसंख्या ।
ख. इंटरनेट ।
ग. राष्ट्रीय भावैक्य ।
4. पत्र लेखन -
अ. अपनी पढ़ाई के बारे पिताजी को पत्र ।
अथवा
आ. अपनी बहन की शादी में भाग लेने के लिए *अपने प्रधान अध्यापक या कक्षा अध्यापक* जी को छुट्टी पत्र ।
*(वहां पर प्रधान अध्यापक या कक्षा अध्यापक जी को लिखना है ध्यान रहे)*
*रचना भाग में कुल 04 प्रश्न और 16 अंक ।*
👆👆👆👆👆
*ತೃತೀಯ ಭಾಷೆ ಹಿಂದಿ ವಿಷಯದಲ್ಲಿ ಹೆಚ್ಚು ಅಂಕ ಹೇಗೆ ಪಡೆಯುವುದು?*
👉 *ಮೊದಲ 8 ಪ್ರಶ್ನೆಗಳು*
ಹಿಂದಿಯಲ್ಲಿ ಮೊದಲ 8 ವಸ್ತುನಿಷ್ಠ ಪ್ರಶ್ನೆಗಳು ಇರುತ್ತವೆ. ವ್ಯಾಕರಣ ಭಾಗದಿಂದ ಪ್ರಶ್ನೆಗಳಿರುತ್ತವೆ. ವಿಲೋಮ, ವಚನ, ಲಿಂಗ, ಪ್ರೇರಣಾರ್ಥಕ, ಕಾರಕ, ವಿರಾಮ ಚಿಹ್ನೆಗಳು, ಸಂಧಿ, ಸಮಾಸ ಇತ್ಯಾದಿ ವ್ಯಾಕರಣ ಅಂಶಗಳ ಮೇಲೆ ಪ್ರಶ್ನೆಗಳಿಗೆ ನಾಲ್ಕು ಆಯ್ಕೆ ಉತ್ತರಗಳನ್ನು ಕೊಡಲಾಗಿರುತ್ತದೆ. ಅದರಲ್ಲಿ ಸರಿಯಾದ ಉತ್ತರ ಆರಿಸಿ ಬರೆಯಬೇಕು.
👉 *ಪ್ರಶ್ನೆ ಸಂಖ್ಯೆ - 9 ರಿಂದ 12 - ಅನುರೂಪತಾ ಪ್ರಶ್ನೆಗಳು*
ಇದರಲ್ಲಿ ಪದಗಳ ಸಹಸಂಬಂಧ ಜೋಡಿಸಬೇಕು. ಗಮನವಿಟ್ಟು ಓದಿ ಉತ್ತರಿಸಬೇಕಾಗುತ್ತದೆ. ಇದಕ್ಕಾಗಿ ಪ್ರತೀ ಅಧ್ಯಾಯದ ಪ್ರಮುಖ ಅಂಶಗಳನ್ನು ಒಂದು ಸಾಲಿನಲ್ಲಿ ಬರೆದು ನೆನಪಿಟ್ಟುಕೊಳ್ಳಬೇಕು.
👉 *ಪ್ರಶ್ನೆ ಸಂಖ್ಯೆ - 13-16 - ಒಂದು ಅಂಕದ ಪ್ರಶ್ನೆಗಳು:*
ಇದರಲ್ಲಿ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಸರಳ -ನೇರ ಪ್ರಶ್ನೆಗಳಾಗಿದ್ದು, ಇಡೀ ವಾಕ್ಯದಲ್ಲಿ ಉತ್ತರಿಸಬೇಕಾಗುತ್ತದೆ.
👉 *ಪ್ರಶ್ನೆ ಸಂಖ್ಯೆ - 17-24 - 2 ಅಂಕದ ಪ್ರಶ್ನೆಗಳು:*
ಇದರಲ್ಲಿ 8 ಪ್ರಶ್ನೆಗಳಿರುತ್ತವೆ. 2 ಪ್ರಶ್ನೆಗಳು ಪೂರಕ ವಾಚನ ಪಾಠಗಳಾದ “ಶನಿ ಸಬ್ಸೇ ಸುಂದರ್ ಗ್ರಹ್’ ಮತ್ತು “ಸತ್ಯ ಕೀ ಮಹಿಮಾ’ ದಿಂದ 4 ಪ್ರಶ್ನೆಗಳು ಬರುತ್ತವೆ. ಇವುಗಳಲ್ಲಿ 2 ಪ್ರಶ್ನೆಗಳಿಗೆ ಮಾತ್ರ ಉತ್ತರಿಸಬೇಕಾಗುತ್ತದೆ. ಹೀಗಾಗಿ ಈ ಎರಡು ಪಾಠಗಳನ್ನು ಹೆಚ್ಚು ಅಧ್ಯಯನ ಮಾಡಬೇಕು.
👉 *ಪ್ರಶ್ನೆ ಸಂಖ್ಯೆ - 25-33 - 3 ಅಂಕದ ಪ್ರಶ್ನೆಗಳು:*
ಇದರಲ್ಲಿ 9 ಪ್ರಶ್ನೆಗಳು ಇರುತ್ತವೆ. ತುಲಸೀ ಕೇ ದೋಹೇ-ದೋಹಾದಿಂದ ಒಂದು ಪ್ರಶ್ನೆ ಬಂದಿರುತ್ತದೆ. 5 ದೋಹಾಗಳ ಭಾವಾರ್ಥ ತಯಾರಿ ಮಾಡಿಕೊಂಡಿದ್ದಲ್ಲಿ ಅದನ್ನು ಬರೆದು 3 ಅಂಕಗಳನ್ನು ಗಳಿಸಬಹುದು. ಇನ್ನೊಂದು ಪ್ರಶ್ನೆ ಮಾತೃಭಾಷೆಗೆ ಅನುವಾದ ಮಾಡುವುದಿರುತ್ತದೆ. ಇನ್ನುಳಿದವು ಗದ್ಯ ಪದ್ಯಗಳಿಂದ ಬಂದಿರುತ್ತದೆ. 4 ಪದ್ಯಗಳು (ಮಾತೃಭೂಮಿ, ಅಭಿನವ ಮನುಷ್ಯ, ಸಮಯ್ ಕೀ ಪಹಚಾನ್ ಮತ್ತು ಕೋಶಿಶ್ ಕರ್ನೇವಾಲೋಂಕೀ ಕಭೀ ಹಾರ್ ನಹೀಂ ಹೋತೀ) ಹಾಗೂ ದೋಹಾ ಓದಿ ನೆನಪಿಟ್ಟುಕೊಳ್ಳಬೇಕು. ಆಗ ಪದ್ಯಭಾಗದಿಂದ ಯಾವುದೇ ಪ್ರಶ್ನೆ ಬಂದರೂ ಸುಲಭವಾಗಿ ಉತ್ತರಿಸಲು ಸಾಧ್ಯವಿದೆ.
👉 *ಪ್ರಶ್ನೆ ಸಂಖ್ಯೆ - 34-35 - 4 ಅಂಕದ ಪ್ರಶ್ನೆಗಳು:*
ದೀರ್ಘ ಉತ್ತರ ವಿಭಾಗದಲ್ಲಿ ಕೇಳಲಾಗುವ ಪ್ರಶ್ನೆಗಳನ್ನು ಉತ್ತರಿಸುವುದಕ್ಕಾಗಿ ಗಿಲ್ಲು, ಬಸಂತ ಕೀ ಸಚ್ಚಾಯಿ, ಕರ್ನಾಟಕ ಸಂಪದಾ ಪಾಠಗಳ ತಯಾರಿ ಮಾಡಿಕೊಳ್ಳಬೇಕು. ನಿಬಂಧ ತಯಾರಿಗಾಗಿ ಪಠ್ಯದ ಕರ್ನಾಟಕ ಸಂಪದಾ ಮತ್ತು ಇಂಟರ್ನೆಟ್ ಕ್ರಾಂತಿ ಅಧ್ಯಾಯವನ್ನು ಹೆಚ್ಚು ಗಮನವಿಟ್ಟು ಓದಿಕೊಳ್ಳಬೇಕು.
*ಪದ್ಯ ಭಾಗ ಪೂರ್ಣಗೊಳಿಸಿ.*
ಕೋಶಿಶ್ ಕರನೆ ವಾಲೋಂಕಿ ಕಭೀ ಹಾರ್ ನಹೀ ಹೋತಿ ಪದ್ಯದ ಕೊನೆಯ ಆರು ಸಾಲುಗಳಲ್ಲಿ ನಾಲ್ಕು ಸಾಲುಗಳು ಕೇಳಲಾಗುತ್ತದೆ. ಈ ಸಾಲುಗಳನ್ನು ಬರೆದು, ಬರೆದು ಕಂಠಪಾಠ ಮಾಡಿಕೊಳ್ಳುವುದು ಉತ್ತಮ.
👉 *5 ಅಂಕದ ಪ್ರಶ್ನೆ ಪತ್ರಲೇಖನ:*
ವ್ಯವಹಾರಿಕ ಪತ್ರದಲ್ಲಿ ರಜೆ ಕೇಳುವ ಪತ್ರವನ್ನು ಮುಖ್ಯ ಶಿಕ್ಷಕರನ್ನು ಉದ್ದೇಶಿಸಿ ಬರೆಯಬೇಕು. ವೈಯಕ್ತಿಕ ಪತ್ರದಲ್ಲಿ ಅಭ್ಯಾಸ ಅಥವಾ ಆರೋಗ್ಯದ ಕುರಿತು ತಂದೆ, ತಾಯಿ ಅಥವಾ ಸಂಬಂಧಿಕರಿಗೆ ಪತ್ರ ಬರೆಯಬೇಕಾಗುತ್ತದೆ. ಯಾವುದಾದರೊಂದು ಪತ್ರ ಆಯ್ಕೆ ಮಾಡಿ ಬರೆಯಬೇಕಾಗುತ್ತದೆ.
👉 *ಇನ್ನಷ್ಟು ಸಲಹೆಗಳು:*
ಮಾದರಿ ಪ್ರಶ್ನೆ ಪತ್ರಿಕೆಯ ಸಣ್ಣ ಮತ್ತು ದೊಡ್ಡ ಉತ್ತರಗಳ ಪ್ರಶ್ನೆಗಳನ್ನು ಗಮನಿಸಬೇಕು. ಪ್ರಶ್ನೆಯೊಂದಿಗೆ ಉತ್ತರ ಎಷ್ಟಿರಬೇಕು, ಹೇಗೆ ಬರೆದರೆ ಅನುಕೂಲ ಎಂಬುದನ್ನು ಆಯಾ ಪಠ್ಯದ ಕೊನೆಗೆ ಇರುವ ನೋಟ್ಸ್ ಓದಿ ತಿಳಿದುಕೊಂಡು ನೆನಪಿಟ್ಟುಕೊಳ್ಳುವುದು. ಮುಖ್ಯವಾದ ಪಾಠಗಳನ್ನು ಗಮನಿಸಿ, ಸಣ್ಣ ಸಣ್ಣ ಅಂಶಗಳನ್ನು ನೆನಪಿಟ್ಟುಕೊಳ್ಳಿ. ಹಿಂಜ ರಿಕೆ ಬೇಡ. ಚೆನ್ನಾಗಿ ಓದಿ, ಪುನರಾವರ್ತಿಸಿ. ಸಂದೇಹಗಳೇನೇ ಇದ್ದರೂ ನಿಮ್ಮ ಗುರು ಗಳನ್ನು ಕೇಳಿ ಬಗೆಹರಿಸಿಕೊಳ್ಳಬೇಕು. ಟಿ.ವಿ., ಮೊಬೈಲ್ನಿಂದ ದೂರವಿದ್ದು, ಓದು, ಪರೀಕ್ಷೆಯ ಕಡೆಯೇ ಗಮನ ಇರಲಿ. ಸರಿಯಾಗಿ ನಿದ್ದೆ ಹಾಗೂ ನಿತ್ಯದ ವ್ಯಾಯಾಮವನ್ನು ಅವಗಣಿಸಬೇಡಿ. ಒತ್ತಡಗಳಿಂದ ದೂರವಾಗಿ ಪರೀಕ್ಷೆಯನ್ನು ಸಂತೋಷದಿಂದ ಎದುರುಗೊಳ್ಳಿ. ಖಂಡಿತ ಯಶಸ್ಸು ನಿಮ್ಮದಾಗಲಿದೆ.
ಹಿಂದಿ ಪಠ್ಯವನ್ನು ಓದುವ ಸಂದರ್ಭದಲ್ಲಿ ಪ್ರತಿಯೊಂದೂ ಅಧ್ಯಾಯದ ಪ್ರಮುಖಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳ ಬೇಕು. ಇದು ಪರೀಕ್ಷೆ ಸಮೀಪಿಸಿದಾಗ ವಿದ್ಯಾರ್ಥಿಗಳಿಗೆ ಅನುಕೂಲವಾಗು ತ್ತದೆ. ವ್ಯಾಕರಣವನ್ನು ಸರಿಯಾಗಿ ಅರ್ಥೈಸಿಕೊಂಡಲ್ಲಿ ಉತ್ತರಗಳ ಆಯ್ಕೆ ಸುಲಭವಾಗು ತ್ತದೆ. ಸಾಧ್ಯವಾ ದಷ್ಟು ಈ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳ ಲಾದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆದು ಅಭ್ಯಾಸ ಮಾಡಿಕೊಂಡರೆ ಉತ್ತಮ. ಪುನರಾವರ್ತನೆಯಾದ ಮತ್ತು ಪ್ರಮುಖ ಪಾಠಗಳ ಪ್ರಶ್ನೆಗಳತ್ತ ಗಮನವನ್ನು ಕೇಂದ್ರೀಕರಿಸಿ ಓದಿದಲ್ಲಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಬಹುದು.
ಪ್ರಸಕ್ತ ಶೈಕ್ಷಣಿಕ ವರ್ಷದ ಅಂತಿಮ ಘಟ್ಟಕ್ಕೆ ಬಂದು ವಿದ್ಯಾರ್ಥಿಗಳು ತಲುಪಿದ್ದಾರೆ. ವಾರ್ಷಿಕ ಪರೀಕ್ಷೆಗಳ ಭರಾಟೆ ಆರಂಭಗೊಂಡಿದೆ. ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಥಿಗಳಂತೂ ತಮ್ಮ ಪಬ್ಲಿಕ್ ಪರೀಕ್ಷೆಯ ಬಗೆಗೆ ಸಹಜವಾಗಿಯೇ ತುಸು ಆತಂಕದಲ್ಲಿದ್ದಾರೆ. ಆದರೆ ಎಲ್ಲ ತರಗತಿಗಳಲ್ಲಿ ಎದುರಿಸಿದ ಪರೀಕ್ಷೆಯಂತೆ ಇದೂ ಕೂಡ ಒಂದು ಎಂಬ ಮನೋಭಾವದೊಂದಿಗೆ ಪರೀಕ್ಷೆಗೆ ಸಮರ್ಪಕ ತಯಾರಿ, ಅಧ್ಯಯನ ನಡೆಸಿದರೆ ಈ ಪರೀಕ್ಷೆಗಳಲ್ಲಿ ತೇರ್ಗಡೆಯಾಗುವುದು ಬಲು ಸುಲಭ. ಪರೀಕ್ಷೆ ತಯಾರಿ, ಪರೀಕ್ಷೆಯನ್ನು ಬರೆಯುವ ಸಂದರ್ಭದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ ಅತ್ಮಸ್ಥೈರ್ಯವನ್ನು ವೃದ್ಧಿಸಿಕೊಳ್ಳುವುದು ಅತ್ಯಗತ್ಯ. ಈ ಬಗ್ಗೆ ಮಾನಸಿಕ ಆರೋಗ್ಯ ತಜ್ಞರು ವಿದ್ಯಾರ್ಥಿಗಳು ಮತ್ತವರ ಹೆತ್ತವರಿಗೆ ನೀಡಿರುವ ಕೆಲವೊಂದು ಸಲಹೆಗಳು ಇಲ್ಲಿವೆ.
ಪರೀಕ್ಷೆ’ ಎಂಬುದು ಜೀವನದ ಒಂದು ಭಾಗ. ನಾವೆಲ್ಲರೂ ಜೀವನದಲ್ಲಿ ಒಂದೊಂದು ಪರೀಕ್ಷೆ ಎದುರಿಸಲೇಬೇಕು. ಹೀಗಾಗಿ ಪರೀಕ್ಷೆ ಎಂಬ ಶಬ್ದವೇ ಸಾಮಾನ್ಯವಾಗಿ ನಮ್ಮಲ್ಲಿ ಆತಂಕ-ಭಯ ಹುಟ್ಟಿಸುತ್ತದೆ. ಇತ್ತೀಚೆಗೆ ಮಕ್ಕಳಲ್ಲಿ ಪರೀಕ್ಷೆ ಎಂಬ ಆತಂಕ ಕಾಣಿಸಿಕೊಳ್ಳುತ್ತಿದೆ.
ಪರೀಕ್ಷೆಯ ಬಗ್ಗೆ ಸ್ವಲ್ಪ ಮಟ್ಟಿನ ಆತಂಕ ಇರಬೇಕು. ಆತಂಕ ಇದ್ದರೆ ಮಾತ್ರ ಓದಲು ಪ್ರೇರಣೆ ಸಿಗುತ್ತದೆ. ಆತಂಕವಿಲ್ಲದಿದ್ದರೆ ಏನೂ ಆಗದು. ಆದರೆ ಆತಂಕ ಯಾವತ್ತಿಗೂ ಕೂಡ ಅತಿಯಾಗಿರಬಾರದು. ಒಂದು ವೇಳೆ ಅತಿ ಯಾದ ಆತಂಕಕ್ಕೊಳಗಾದರೆ ವಿದ್ಯಾರ್ಥಿಯ ಕಲಿಕೆ, ಪರೀಕ್ಷೆ ಹಾಗೂ ಫಲಿತಾಂಶದ ಮೇಲೆ ಅದು ಪರಿಣಾಮ ಬೀರುತ್ತದೆ.
ಪರೀಕ್ಷೆ ಇನ್ನು ಕೆಲವೇ ದಿನ ಇರುವುದರಿಂದ “ಓದಿಲ್ಲ’ ಎಂಬ ಭಯ ವಿದ್ಯಾರ್ಥಿಗಳಲ್ಲಿ ಇರಕೂಡದು. ಬದಲಾಗಿ ಇಲ್ಲಿಯವರೆಗೆ ಎಷ್ಟು ಓದಿದ್ದಾರೋ ಅದನ್ನು ಮಾತ್ರ ಮತ್ತೆ ಮತ್ತೆ ಓದಿ, ಮನನ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಕೊನೆಯ ಹಂತದಲ್ಲಿರುವ ಕಾರಣದಿಂದ ಹೊಸ ಓದು ಮತ್ತಷ್ಟು ಆತಂಕ ತರಿಸಬಹುದು.
ಪರೀಕ್ಷಾ ತಯಾರಿ ಹೀಗಿರಲಿ
ಪರೀಕ್ಷೆಯ ಮುನ್ನಾ ದಿನ ಮಕ್ಕಳು ಕನಿಷ್ಠ 6 ಗಂಟೆ ನಿದ್ದೆ ಮಾಡಲೇಬೇಕು. ಶೇ.60 ರಷ್ಟು ಮಕ್ಕಳು ಪರೀಕ್ಷೆಯ ಮುನ್ನಾ ದಿನ ನಿದ್ದೆ ಮಾಡುವುದಿಲ್ಲ. ಬದಲಾಗಿ ರಾತ್ರಿಯವರೆಗೆ ಕುಳಿತು ಓದುತ್ತಾರೆ. ಇದು ಮರು ದಿನದ ಪರೀಕ್ಷೆಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಹೀಗಾಗಿ ಅವರಲ್ಲಿ ಒತ್ತಡ ಅಧಿಕ ವಾಗುತ್ತದೆ. ಜತೆಗೆ ಬಹುತೇಕ ವಿದ್ಯಾರ್ಥಿಗಳು ಪರೀಕ್ಷೆಯ ದಿನ ಏನೂ ತಿನ್ನುವುದಿಲ್ಲ. ಇದು ಮತ್ತೂಂದು ಸಮಸ್ಯೆಗೆ ಕಾರಣವಾಗುತ್ತದೆ. ಬದಲಾಗಿ ಲಘು ಆಹಾರ ಸೇವಿಸಲೇಬೇಕು.
ಪರೀಕ್ಷೆಯ ಮುನ್ನ ಸಕಾರಾತ್ಮಕ ಭಾವನೆ ಯನ್ನು ಬೆಳೆಸಿಕೊಳ್ಳಬೇಕು. ಮನನ ಮಾಡಿ ಕೊಳ್ಳಬೇಕು. ಇದರ ಮೂಲಕ ಆತ್ಮಸ್ಥೈರ್ಯ ಬೆಳೆಸುವ ಪ್ರಯತ್ನ ಮಕ್ಕಳು ರೂಢಿಸಿಕೊಂಡರೆ ಉತ್ತಮ. ಪರೀಕ್ಷೆಗೆ ಒಂದು ವಾರ ಬಾಕಿ ಉಳಿದಿರುವಾಗಲೇ ಆರಾಮವಾಗಿರಲು ಮಕ್ಕಳು ನಿಯಮಿತವಾಗಿ ಉಸಿರಾ ಟದತ್ತ ಗಮನ ಕೇಂದ್ರೀಕರಿಸಿ ವ್ಯಾಯಾಮ ಮಾಡಿದರೆ ಉತ್ತಮ. ಇದರಿಂದಾಗಿ ದೇಹ ಹಾಗೂ ಮನಸ್ಸು ಶಾಂತವಾಗುತ್ತದೆ. ಇದು ನೆನಪಿನ ಶಕ್ತಿವೃದ್ಧಿಯಾಗಲು ಸಹಕಾರಿ.
ಪರೀಕ್ಷೆಗೂ ಮುನ್ನ ಪರೀಕ್ಷೆಯ ಬಗ್ಗೆ ಮಾತ್ರ ಗಮನಹರಿಸಬೇಕು. ಫಲಿತಾಂಶದ ಬಗ್ಗೆ ಅಲ್ಲ. ಚೆನ್ನಾಗಿ ಗೊತ್ತಿರುವ ಪ್ರಶ್ನೆಗೆ ಮೊದಲು ಉತ್ತರಿಸಿ, ಸ್ವಲ್ಪ ಗೊತ್ತಿರುವ ಪ್ರಶ್ನೆಗೆ ಮತ್ತೆ ಉತ್ತರಿಸುವ ಶೈಲಿ ಸಾಧ್ಯವಾದರೆ ಬೆಳೆಸಿಕೊಳ್ಳಿ. ಬಹುಮುಖ್ಯವಾಗಿ ಪ್ರಶ್ನೆಗಳು “ಕಷ್ಟ’ ಎಂಬ ಬಗ್ಗೆ ಗಾಬರಿಯಾಗಬೇಡಿ.
ಪರೀಕ್ಷೆ ಬಳಿಕ ಚರ್ಚೆ ಬೇಡ!
ಪರೀಕ್ಷೆಯ ಬಳಿಕ ಕೆಲವು ವಿದ್ಯಾರ್ಥಿಗಳು ಇತರ ಮಕ್ಕಳ ಜತೆಗೆ ಪ್ರಶ್ನೆ-ಉತ್ತರದ ಬಗ್ಗೆ ಚರ್ಚೆ ಮಾಡುತ್ತಾರೆ. ಒಂದು ವೇಳೆ ಆತಂಕ ಇರುವ ಮಕ್ಕಳಿಗೆ ಇಂತಹ ಚರ್ಚೆಯಿಂದಾಗಿ ತಾವು ತಪ್ಪು ಬರೆದಿದ್ದರೆ ಅಥವಾ ಉತ್ತರ ಗೊತ್ತಿದ್ದೂ ಬರೆಯದಿದ್ದರೆ ಆತಂಕ ಮತ್ತಷ್ಟು ಹೆಚ್ಚಾಗಬಹುದು. ಇದರಿಂದ ಮುಂದಿನ ಪರೀಕ್ಷೆಯ ತಯಾರಿ, ಓದಿನ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಆ ಪರೀಕ್ಷೆಯ ವಿಚಾರವನ್ನು ಮರೆತು ಬಿಡಿ; ಬದಲಾಗಿ ಮುಂದಿನ ಪರೀಕ್ಷೆ ಬಗ್ಗೆ ಮಾತ್ರ ನಿಮ್ಮ ಗಮನವನ್ನೆಲ್ಲ ಕೇಂದ್ರೀಕರಿಸಿ.
ಪರೀಕ್ಷೆ ನೆಲೆಯಲ್ಲಿ ವಿದ್ಯಾರ್ಥಿಗಳು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಇತ್ತ ಹೆಚ್ಚಿನ ಲಕ್ಷ್ಯ ಹರಿಸುವುದು ಅತೀ ಮುಖ್ಯ ಜತೆಯಲ್ಲಿ ಮಾನಸಿಕ ಆರೋಗ್ಯ ಚೆನ್ನಾಗಿರ ಬೇಕು. ಕಲಿಕೆಯ ಮಧ್ಯೆ ಐದು ನಿಮಿಷ ಗಳ ರಿಲ್ಯಾಕ್ಸ್ ತೆಗೆದುಕೊಳ್ಳುವುದು ಉತ್ತಮ. ರಿಲ್ಯಾಕ್ಸ್ ವೇಳೆ ಟಿವಿ, ಮೊಬೈಲ್ ದಾಸರಾಗು ವುದಲ್ಲ. ಒಂದು ವೇಳೆ ಮಕ್ಕಳಿಗೆ ಏನೇ ಸಮಸ್ಯೆ ಇದ್ದರೆ ಹೆತ್ತವರಲ್ಲಿ ಮಾತನಾಡಿ ಹಾಗೂ ಅವರು ಕೂಡ ಮಕ್ಕಳ ಜತೆಗೆ ಪರೀಕ್ಷಾ ಸಮಯ
ದಲ್ಲಿ ಹೆಚ್ಚು ಮಾತನಾಡಿ, ಧೈರ್ಯ ತುಂಬಿ.
ಫಲಿತಾಂಶದ ಬಗ್ಗೆ ಆಲೋಚನೆ ಬೇಡ; ನನ್ನ ಉತ್ತರಪತ್ರಿಕೆಯನ್ನು ಯಾರು ತಿದ್ದುತ್ತಾರೋ ಎಂಬ ಬಗ್ಗೆ ಯೋಚಿಸಬೇಡಿ- ಬದಲಾಗಿ ಪರೀಕ್ಷೆ ಬರೆಯುವುದು ಮಾತ್ರ ನಮ್ಮ ಕರ್ತವ್ಯ ಎಂಬುದು ಮಕ್ಕಳ ನೆನಪಿನಲ್ಲಿರಲಿ.
ಅಂತೂ, ಫಲಿತಾಂಶ ಏನೇ ಇರಲಿ; ಅದನ್ನು ಸ್ವೀಕರಿಸಲೇಬೇಕು. ಯಾಕೆಂದರೆ ಈ ಪರೀಕ್ಷೆಯ ಫಲಿತಾಂಶ ನಿಮ್ಮ ಜೀವನವನ್ನು ವರ್ಣಿಸುವುದಿಲ್ಲ. ಬದಲಾಗಿ ಈ ಪರೀಕ್ಷೆಯಲ್ಲಿ ಮಾತ್ರ ಹೇಗೆ ಫಲಿತಾಂಶ ಇದೆ ಎಂಬುದನ್ನು ಮಾತ್ರ ಹೇಳುತ್ತದೆ. ಜೀವನದ ಪರೀಕ್ಷೆ ಮುಂದೆಯೂ ಇದೆ!
ಎಸೆಸೆಲ್ಸಿ ಟಿಪ್ಸ್
– ಆತಂಕ ಸಹಜ, ಆದರೆ ಅತಿಯಾದ ಆತಂಕ ಪಡುವ ಅಗತ್ಯವಿಲ್ಲ.
– ಪರೀಕ್ಷೆ, ಫಲಿತಾಂಶದ ಬಗೆಗೆ ತಲೆಕೆಡಿಸಿಕೊಳ್ಳುವ ಬದಲು ಓದಿನತ್ತ ಗಮನ ಕೇಂದ್ರೀಕರಿಸಿ.
– ಕೊನೆಯ ಹಂತದಲ್ಲಿ ಈವರೆಗೆ ಓದಿದ ವಿಷಯಗಳನ್ನು ಮತ್ತೂಮ್ಮೆ ಓದಿ ಸರಿಯಾಗಿ ಮನದಟ್ಟು ಮಾಡಿ ಕೊಳ್ಳಿ. ಹೊಸದಾಗಿ ಓದು ಆರಂಭಿಸು ವುದು ಆತಂಕವನ್ನು ಹೆಚ್ಚಿಸೀತು.
– ಪರೀಕ್ಷೆಯ ಮುನ್ನಾದಿನ ಕನಿಷ್ಠ 6 ಗಂಟೆ ನಿದ್ದೆ ಮಾಡಿ. ನಿದ್ದೆಗೆಟ್ಟು ಓದುವುದು ಸರಿಯಲ್ಲ.
– ಅಧ್ಯಯನ ಮತ್ತು ಪರೀಕ್ಷೆಯ ವೇಳೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನಹರಿಸಿ.
– ಸಕಾರಾತ್ಮಕ ಮನೋಭಾವ ಮೈಗೂಡಿಸಿಕೊಂಡಲ್ಲಿ ಆತಂಕ ಕಡಿಮೆಯಾಗುತ್ತದೆ.
– ಪರೀಕ್ಷೆ ಎದುರಿಸಿದ ಬಳಿಕ ಆ ಬಗ್ಗೆ ಚರ್ಚೆ ಬೇಡ, ಮುಂದಿನ ವಿಷಯದ ಪರೀಕ್ಷೆಗೆ ಸಜ್ಜಾಗುವುದೇ ನಿಮ್ಮ ಆದ್ಯತೆಯಾಗಲಿ.

No comments:
Post a Comment